ಎಂ.ಆರ್. ದತ್ತಾತ್ರಿ ವೃತ್ತಿಯಿಂದ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದರೂ ತಮ್ಮ ಅಂಕಣ ಬರಹಗಳು, ಕವನ ಸಂಕಲನ, ಲಲಿತ ಪ್ರಬಂಧಗಳು ಜೊತೆಗೆ ತಮ್ಮ ಕಾದಂಬರಿ ದ್ವೀಪವ ಬಯಸಿ ಮೂಲಕ ಎಲ್ಲರಿಗೂ ಪರಿಚಯ. ಚಿಕ್ಕಮಗಳೂರಿನವರು. ಹಲವಾರು ವರ್ಷ ಅಮೇರಿಕಾದಲ್ಲಿ ಕೆಲಸ ಮಾಡಿ ಈಗ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಇವರ ಪ್ರಕಟಿತ ಪುಸ್ತಕಗಳು - ಅಲೆಮಾರಿ ಕನಸುಗಳು (೨೦೦೨) ಮತ್ತು ಪೂರ್ವ ಪಶ್ಚಿಮ (೨೦೦೫). ಪೂರ್ವ ಪಶ್ಚಿಮ ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದಿಂದ ೨೦೦೬ನೇ ಸಾಲಿನ ಡಾ. ಹಾ.ಮಾ. ನಾಯಕ ಪ್ರಶಸ್ತಿ ಬಂದಿದೆ.
ಕವನ ಸಂಕಲನ -
ಅಲೆಮಾರಿ ಕನಸುಗಳು (೨೦೦೨)
ಅಂಕಣ ಬರಹಗಳ ಸಂಗ್ರಹ -
ಪೂರ್ವ ಪಶ್ಚಿಮ (೨೦೦೫)
ಲಲಿತ ಪ್ರಬಂಧಗಳ ಸಂಕಲನ
ಮಥಿಸಿದಷ್ಟೂ ಮಾತು - ತ್ರಿವೇಣಿ ಶ್ರೀನಿವಾಸ್ ರಾವ್ ಜತೆ ಸೇರಿ ಸಂಪಾದಿಸಿದ ಕೃತಿ
ಕಾದಂಬರಿ -
ದ್ವೀಪವ ಬಯಸಿ
ಪ್ರಶಸ್ತಿಗಳು -
ಕೋಟೇಶ್ವರ ಎನ್.ಆರ್.ಎ.ಎಂ.ಎಚ್. ಪ್ರಕಾಶನ ಪ್ರತಿ ವರ್ಷ ನೀಡುವ ದಿ.ಸೂರ್ಯ ನಾರಾಯಣ ಚಡಗ ಸ್ಮಾರಕ ಪ್ರಶಸ್ತಿ- 2012 - ದ್ವೀಪವ ಬಯಸಿ ಕಾದಂಬರಿಗೆ,
ಅಮ್ಮ ಪ್ರಶಸ್ತಿ - ದ್ವೀಪವ ಬಯಸಿ ಕಾದಂಬರಿಗೆ,
ಶಿವಮೊಗ್ಗ ಕರ್ನಾಟಕ ಸಂಘದ ಹಾಮಾ ನಾಯಕ ಪ್ರಶಸ್ತಿ - ‘ಪೂರ್ವ ಪಶ್ಚಿಮ’ ಅಂಕಣ ಬರಹಗಳ ಸಂಗ್ರಹಕ್ಕೆ ಬಂದಿವೆ.